ಬಾಲ್ಯದಲ್ಲೊಂದು ದಿನ,
ಜಗಲಿಯ ತುದಿಯಲ್ಲಿ ಕುಂತು ಕಂಡ ಭವಿತವ್ಯದ ಕನಸು,
ಇನ್ನೂ ಆಗಲಿಲ್ಲ ಅದು ನನಸು.
ಜ್ಞಾನ ದೀವಿಗೆಯ ಹೊತ್ತಿಸಬೇಕು ಎಂಬ ಹುಮ್ಮಸ್ಸು,
ಆದರೆ ಅದಕಿನ್ನು ಪರಿಪಕ್ವವಾಗಿಲ್ಲ ನನ್ನೀ ಮನಸ್ಸು.
ದಿನಕಳೆದಂತೆ ಭವಿಷ್ಯದ ಕನಸೂ
ಅಭಿರುಚಿಯೊಂದಿಗೆ ಬದಲಿಸಿತು.
ಸ್ಟೆತಾಸ್ಕೋಪ್ ನೊಂದಿಗೆ ನಂಟು ಬೆಳೆಸುವ ಬಯಕೆ ಕಾಡತೊಡಗಿತು.
ಬುದ್ಧಿ ಬಲಿದಂತೆ ವೈದ್ಯಳಾಗುವ ಕನಸು,
ಆಲಸ್ಯದೊಂದಿಗೆ ಸೇರಿ ಮರೀಚಿಕೆಯಾಯಿತು.
ಆಗಲೇ ಮನದೊಂದು ಮೂಲೆಯಲ್ಲಿ ತಂತ್ರಜ್ಞೆಯಾಗಬೇಕೆಂಬ ಹಂಬಲ ದಿಢೀರನೆ ಮೂಡಿತು.
ಕಂಡ ಕನಸೊಂದಾದರೂ ನನಸಾಯ್ತೆಂಬಂತೆ,
ಕೊನೆಗೂ ನಾನಾದೆ ಒಬ್ಬ ತಂತ್ರಜ್ಞೆ.
ಆದರೂ ಮನಸಲ್ಲಿ ಅನಿಸುವುದು ಒಮ್ಮೊಮ್ಮೆ ,
ಬಾಲ್ಯದಲ್ಲಿ ಕಂಡ ಭವಿತವ್ಯದ ಕನಸುಗಳೆಲ್ಲ ,
ಕಾಡದೆ ಹೋದೀತೆ ಇನ್ನು ಮುಂದೆ ??!!
ಜಗಲಿಯ ತುದಿಯಲ್ಲಿ ಕುಂತು ಕಂಡ ಭವಿತವ್ಯದ ಕನಸು,
ಇನ್ನೂ ಆಗಲಿಲ್ಲ ಅದು ನನಸು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ